ನಾವು ಕಂಡಿರುವ ಮತ್ತು ಕೇಳಿರುವ ಪ್ರಕಾರ ಈ ರೀತಿ ಆಹಾರಕ್ರಮಗಳನ್ನು ಚೀನಿಯರು ಹೊಂದಿದ್ದಾರೆ.
ಆದರೆ ನಮ್ಮ ದೇಶದಲ್ಲಿ ಕೆಲವು ಕಡೆ ಈ ರೀತಿಯ ಆಹಾರ ಪದ್ಧತಿ ಇದೆ.
ನಿಮಗೆ ಇದು ಆಶ್ಚರ್ಯವಾಗಬಹುದು ಆದರೂ ಇದು ಸತ್ಯ.
ಕರ್ನಾಟಕದಲ್ಲಿ ಇರುವೆಯನ್ನು ಆಹಾರ ಕ್ರಮವಾಗಿ ಬಳಸುವ ಪದ್ಧತಿ ಹಿಂದಿನಿಂದಲೂ ನಡೆದುಬಂದಿದೆ.
1. ಕರ್ನಾಟಕದ ಯಾವ ಭಾಗದಲ್ಲಿ ಇರುವೆಯನ್ನು ಆಹಾರಕ್ರಮದಲ್ಲಿ ಸೇವಿಸುತ್ತಾರೆ?
ಕರ್ನಾಟಕದ ಮಲೆನಾಡು ಭಾಗಗಳಲ್ಲಿ ಇರುವೆಯನ್ನು ಆಹಾರ ಕ್ರಮವಾಗಿ ಬಳಸುತ್ತಾರೆ.
ವಿಶೇಷವಾಗಿ ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಸಕಲೇಶಪುರ, ಶಿವಮೊಗ್ಗ, ತೀರ್ಥಹಳ್ಳಿ ಭಾಗಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.
2. ಯಾವ ಜಾತಿಯ ಇರುವೆಗಳು ಸೇವಿಸಲು ಯೋಗ್ಯ?
ಇರುವೆಯ ಸಂಕುಲದಲ್ಲಿ ಹಲವು ರೀತಿಯ ಇರುವೆಗಳು ಕಂಡುಬರುತ್ತವೆ.
ಆದರೆ ಅದರಲ್ಲಿ ತಿನ್ನಲು ಯೋಗ್ಯವಾದ ಹಾಗೂ ಉತ್ತಮವಾದ ಇರುವೆಯ ಸಂಕುಲ ವೆಂದರೆ, ಅದು ಕೆಂಪು ಬಣ್ಣ ಹೊಂದಿರುವ ಕೆಂಪು (ಚಗಳಿ)ಇರುವೆಗಳು.
3. ಎಲ್ಲಾ ಋತುಗಳಲ್ಲೂ ಇರುವೆಯನ್ನು ಆಹಾರವನ್ನಾಗಿ ಸೇವಿಸಲು ಯೋಗ್ಯವೇ?
ಇರುವೆಯನ್ನು ಆಹಾರವನ್ನಾಗಿ ಕೇವಲ ಚಳಿಗಾಲದ ಸಮಯದಲ್ಲಿ ಬಳಸುತ್ತಾರೆ.
ಈ ಕೆಂಪು ಇರುವೆಗಳು ಚಳಿಗಾಲದಲ್ಲಿ (ಅಕ್ಟೋಬರ್, ನವಂಬರ್, ಡಿಸೆಂಬರ್, ಜನವರಿ) ತಿಂಗಳಿನಲ್ಲಿ ಸೇವಿಸಲು ಮಾತ್ರ ಯೋಗ್ಯವಾಗಿರುತ್ತವೆ.
ಏಕೆಂದರೆ ಈ ಕಾಲದಲ್ಲಿ ಇರುವೆಗಳು ಮೊಟ್ಟೆ ಇಡುವ ಸಮಯವಾಗಿರುತ್ತದೆ ಹಾಗೂ ಇರುವೆಗಳ ದೇಹದಲ್ಲಿ ಹುಳಿಯ ಅಂಶ ಹೆಚ್ಚಾಗಿರುತ್ತದೆ.
4. ಕೆಂಪು ಇರುವೆಯನ್ನು ಕೊಯ್ಲು ಮಾಡುವ ಬಗೆ ಹಾಗೂ ಸೇವಿಸುವ ಕ್ರಮ ಹೇಗೆ?
ಸಾಮಾನ್ಯವಾಗಿ ಚಳಿಗಾಲದ ಸಮಯದಲ್ಲಿ ಬೆಳಗಿನ ಜಾವ ಎದ್ದು ಇರುವೆಯ ಗೂಡನ್ನು ಕಡಿಯಲು ಹೋಗುತ್ತಾರೆ. ಏಕೆಂದರೆ ಬೆಳಗ್ಗಿನ ಸಮಯದಲ್ಲಿ ಚಳಿ ಹೆಚ್ಚಿರುವುದರಿಂದ ಇರುವೆಗಳು ಗೂಡಿನ ಒಳಗೆ ಇರುತ್ತವೆ. ಹಾಗೆ
ಈ ಸಮಯದಲ್ಲಿ ಇರುವೆಗಳು ಕಚ್ಚುವ ತೀವ್ರತೆ ಕಮ್ಮಿ ಇರುತ್ತದೆ.
ಹೆಚ್ಚಾಗಿ ಈ ಇರುವೆಗಳು ಹುಳಿ ಅಂಶ ಇರುವ ಮರಗಳಲ್ಲಿ (ಮಾವಿನ ಮರ,ನೇರಳೆ ಮರ,ಹುಣಸೆ ಮರ.....)ಗೂಡು ಕಟ್ಟುತ್ತವೆ.
ಮರಹತ್ತಿ ಗೂಡನ್ನು ಕಡಿದು ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಿಡುತ್ತಾರೆ.
ಅದನ್ನು ತೆಗೆದುಕೊಂಡು ಬಂದು ಮುಚ್ಚಿದ ಪಾತ್ರೆಯನ್ನು ಒಲಯ ಮೇಲೆ ಇಟ್ಟು ಬಿಸಿ ಮಾಡುತ್ತಾರೆ.
ಆಗ ಇರುವೆಗಳೆಲ್ಲಾ ಸತ್ತು ಹೋಗುತ್ತವೆ. ನಂತರ ಅದನ್ನು ಹೊರತೆಗೆದು ಇರುವೆ ಹಾಗೂ ಮೊಟ್ಟೆಯನ್ನು ಕಸದಿಂದ ಬೇರ್ಪಡಿಸಿ,
ಬಿಸಿಲಿನಲ್ಲಿ ಒಣಗಲು ಹರಡುತ್ತಾರೆ.
ಒಣಗಿದ ನಂತರ ಅದನ್ನು ಶೇಖರಿಸಿಡಲಾಗುತ್ತದೆ. ನಂತರ ಅದನ್ನು ಚಟ್ನಿ ಮಾಡಲು ಬಳಸುತ್ತಾರೆ.
ಹೇಗೆಂದರೆ ತೆಂಗಿನ ಕಾಯಿ ಚಟ್ನಿಗೆ ಹೇಗೆ ತೆಂಗಿನಕಾಯಿ ಹಾಕುತ್ತೇವೆಯೇ, ಹಾಗೆ ತೆಂಗಿನಕಾಯಿ ಜಾಗದಲ್ಲಿ, ಸಂಸ್ಕರಿಸಿದ ಇರುವೆಯನ್ನು ಹಾಕಿ ಚಟ್ನಿಯನ್ನು ತಯಾರಿಸುತ್ತಾರೆ.
ಮಲೆನಾಡಿನ ಭಾಗದಲ್ಲಿ ಬೆಳಗಿನ ಉಪಹಾರಕ್ಕೆ ಅಕ್ಕಿ ರೊಟ್ಟಿ ಹಾಗೂ ಕಡುಬಿನ ಜೊತೆ ಸೇವಿಸಿದರೆ ಬಹಳ ರುಚಿಯಾಗಿರುತ್ತದೆ.
5. ಕೆಂಪು (ಚಗಳಿ)ಇರುವೆ ಸೇವನೆ ಆರೋಗ್ಯಕ್ಕೆ ಹೇಗೆ ಪೂರಕ?
ಕೆಂಪು ಇರುವೆ ಸೇವನೆಯಿಂದ ಆರೋಗ್ಯಕ್ಕೆ ಬಹಳ ಲಾಭಗಳಿವೆ.
1. ಇರುವೆಗಳನ್ನು ಸೇವಿಸುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
2. ಕಣ್ಣಿನ ದೃಷ್ಟಿ ಹೆಚ್ಚುತ್ತದೆ ಮತ್ತು ಕಣ್ಣಿನ ದೋಷಗಳು ನಿವಾರಣೆಯಾಗುತ್ತವೆ.
3. ಇರುವೆಯ ದೇಹದಲ್ಲಿ ಹುಳಿಯ ಅಂಶ ಹೆಚ್ಚು, ಇರುವುದರಿಂದ " ಸಿ ವಿಟಮಿನ್" ದೇಹಕ್ಕೆ ದೊರೆಯುತ್ತದೆ.ಇದರಿಂದ ಸಿ ವಿಟಮಿನ್ ಕೊರತೆಯಿಂದ ಬರುವ "ಸ್ಕರ್ವಿ ರೋಗವನ್ನು ತಡೆಗಟ್ಟಬಹುದು.
4.ಶೀತ,ನೆಗಡಿ,ಕೆಮ್ಮಿ ನಂತಹ ರೋಗಗಳನ್ನು ಶಮನ ಮಾಡುವ ಶಕ್ತಿಯನ್ನು ಹೊಂದಿದೆ.
5.ದಂತ ಸಮಸ್ಯೆ ಗಳನ್ನು ತಡೆಗಟ್ಟುತ್ತದೆ.
ಧನ್ಯವಾದಗಳೊಂದಿಗೆ...🙏
:- ರತನ್ ರಾಜ್ ಜಕ್ಕಳಿ.
This is my first Blog.support me.Thanking you.
ReplyDeleteI like it. U collect super information...
ReplyDeleteThank you
ReplyDeleteNice bro..
ReplyDeleteThank you bro
Delete